ಶಿಕ್ಷಕರಾದವರು ಕರ್ತವ್ಯ ನಿಷ್ಠೆ ಪಾಲಿಸಬೇಕು: ನಿವೃತ್ತ ಉಪನ್ಯಾಸಕ ಇಂದ್ರಕುಮಾರ್ನನ್ನ ಸೇವಾವಧಿಯಲ್ಲಿ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ನನಗೆ ಸ್ಪಂದಿಸಿದ್ದಾರೆ. ಈ ಸ್ಪಂದನೆಯಿಂದಾಗಿ ನಾನು ಇಂದು ಎಲ್ಲರ ಮನ ಗೆಲ್ಲಲು ಸಾಧ್ಯವಾಗಿದೆ. ಎಲ್ಲರೂ ನನ್ನ ಸೇವೆ ಮತ್ತು ಗುಣದ ಬಗ್ಗೆ ಶ್ಲಾಘನೆ ಮಾಡಿದ್ದಾರೆ, ಬಡತನ ಕುಟುಂಬದಲ್ಲಿ ಬಂದವನು ನಾನು, ಸರಕಾರಿ ಶಾಲಾ- ಕಾಲೇಜುಗಳಲ್ಲಿ ಬಹುತೇಕ ಬಡ ಕುಟುಂಬದ ವರ್ಗದ ವಿದ್ಯಾರ್ಥಿಗಳೇ ಹೆಚ್ಚು ಇರುತ್ತಾರೆ, ಅವರಿಗೆ ನಾವು ನ್ಯಾಯ ಕೊಟ್ಟಾಗ ನಮ್ಮ ನಿವೃತ್ತಿಯ ಜೀವನವು ನೆಮ್ಮದಿಯಾಗಿರುತ್ತದೆ.