ಸರ್ಕಾರದ ಯೋಜನೆ ಪಡೆಯಲು ಛಾಯಾಗ್ರಾಹಕರು ಸಂಘಟಿತರಾಗಲಿ-ವಿಜಯ ಜಾಧವಇಂದಿನ ತಂತ್ರಜ್ಞಾನ ಯುಗದಲ್ಲಿ ಛಾಯಚಿತ್ರ ವೃತ್ತಿಯನ್ನೆ ನಂಬಿಕೊಂಡು ವೃತ್ತಿ ಮಾಡುತ್ತಿರುವ ಛಾಯಾಗ್ರಾಹಕರ ಬದುಕು ತುಂಬಾ ಕಷ್ಟಕರವಾಗಿದೆ. ನಾವು ಮೊದಲು ಸಂಘಟಿತರಾಗಬೇಕಿದೆ, ಅಂದಾಗ ಮಾತ್ರ ಸರ್ಕಾರದ ಮಟ್ಟದಲ್ಲಿ ಹಲವಾರು ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳುವ ಅವಕಾಶ ದೊರೆಯುತ್ತದೆ ಎಂದು ದಾವಣಗೆರೆ ಜಿಲ್ಲಾ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರ್ ಸಂಘದ ಅಧ್ಯಕ್ಷ ವಿಜಯ ಜಾಧವ ಕಿವಿಮಾತು ಹೇಳಿದರು.