ಬದುಕಿಗೆ ಬೆಳಕು ತೋರುವವರೇ ನಿಜವಾದ ಗುರು: ಎಂ.ಸಿ. ಕೊಳ್ಳಿಮನುಷ್ಯ ಜೀವನ ಎಂಬುದು ಪುಸ್ತಕ ಇದ್ದ ಹಾಗೆ. ಹುಟ್ಟು ಎಂಬ ಮೊದಲ ಪುಟ, ಸಾವು ಎಂಬ ಕೊನೆಯ ಪುಟವನ್ನು ಭಗವಂತ ಈಗಾಗಲೇ ಬರೆದು ಕಳಿಸಿದ್ದಾನೆ. ಮಧ್ಯದಲ್ಲಿರುವ ಖಾಲಿ ಪುಟಗಳನ್ನು ಅತ್ಯಂತ ಯೋಗ್ಯ ರೀತಿಯಲ್ಲಿ ಬರೆದಿಡುವಂತೆ, ಓದುವಂತೆ, ಮಾರ್ಗದರ್ಶಿಯಾಗುವಂತೆ ಮಾಡುವ ನೇತಾರ ಗುರುವಾಗಿದ್ದಾನೆ. ಗುರುವಿನ ಮಹತ್ವ ಅತ್ಯಂತ ಪ್ರಮುಖವಾದುದು.