ವಿವಿಯಲ್ಲಿ ಗುಣಮಟ್ಟದ ಶಿಕ್ಷಣ, ಸಂಶೋಧನೆ ಪರಿಣಾಮಕಾರಿಯಾಗಿರಲಿ: ಸುಂದರೇಶ ಬಾಬುಯಾವುದೇ ವಿಶ್ವವಿದ್ಯಾಲಯಗಳಾಗಿದ್ದರು ಗುಣಮಟ್ಟದ ಶಿಕ್ಷಣ, ವಿಸ್ತರಣೆ ಹಾಗೂ ಸಂಶೋಧನೆ ವಿಭಾಗಗಳು ಪರಿಣಾಮಕಾರಿಯಾಗಿರಬೇಕು ಆ ನಿಟ್ಟಿನಲ್ಲಿಯೇ ಕೃಷಿ ವಿಜ್ಞಾನಗಳ ವಿವಿಯು ಕಲ್ಯಾಣ ಕರ್ನಾಟಕ ಭಾಗದ ಕೃಷಿ ವಲಯ ಸೇರಿ ಸಮಗ್ರ ಅಭಿವೃದ್ಧಿ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವುದು ಈ ಭಾಗದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಗಳಾದ ಸುಂದರೇಶ ಬಾಬು ಎಂ. ಅವರು ಹೇಳಿದರು.