ಹಾಪ್ಕಾಮ್ಸ್ ರಾಜ್ಯಾಧ್ಯಕ್ಷ ಜಿಲ್ಲೇಲಿ ಹಾಪ್ಕಾಮ್ಸ್ ಅವನತಿ ಹಾದಿರೈತರು ದಲ್ಲಾಳಿಗಳ ಕಪಿಮುಷ್ಟಿಂದ ಹೊರತಾಗಿ ತಾವು ಬೆಳೆದ ಹಣ್ಣು, ತರಕಾರಿಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ಸ್ಥಾಪಿಸಿಕೊಂಡಿದ್ದ ನೇರ ಮಾರುಕಟ್ಟೆ ಹಾಫ್ ಕಾಮ್ಸ್ ಸಹಕಾರ ಸಂಸ್ಥೆ ಇದೀಗ ದಿನೇ ದಿನೇ ಕುಸಿಯುತ್ತಿದ್ದು, ಸಂಸ್ಥೆಯ ರಾಜ್ಯಾಧ್ಯಕ್ಷ ಗೋಪಾಲ್ಕೃಷ್ಣೇಗೌಡರ ತವರು ಜಿಲ್ಲೆಯಲ್ಲಿಯೇ ಅವನತಿಯ ಹಾದಿ ಹಿಡಿದಿದೆ. ಅದನ್ನು ಉಳಿಸಿ ಉತ್ತೇಜಿಸಲು ಹಾಪ್ ಕಾಮ್ಸ್ ಸಹಕಾರ ಸಂಸ್ಥೆ, ರೈತರು ಮತ್ತು ಸರ್ಕಾರ ದಿಟ್ಟ ಹೆಜ್ಜೆ ಇಡಬೇಕಿದೆ