ಸ್ತ್ರೀ ಶಕ್ತಿ, ಸ್ವ-ಸಹಾಯ ಸಂಘ ನಡೆಸುವುದು ಸುಲಭದ ಮಾತಲ್ಲ: ತ್ರಿನೇತ್ರ ಶಿವಯೋಗಿ ಸ್ವಾಮೀಜಿಧಾರ್ಮಿಕ ಕಾರ್ಯಕ್ರಮಗಳು ಜನರಲ್ಲಿ ಭಗವಂತನ ಬಗ್ಗೆ ಉತ್ತಮ ಸಂದೇಶ ನೀಡುತ್ತವೆ. ಧಾರ್ಮಿಕ ಚಿಂತನೆಗಳ ಪಾಲನೆಯಿಂದಾಗಿ ಸಮಾಜದಲ್ಲಿ ಶಾಂತಿ, ಶಿಸ್ತುಬದ್ಧ ಜೀವನ, ಸಾಮರಸ್ಯ, ಸಹೋದರತ್ವ ಭಾವನೆ, ಸಹಬಾಳ್ವೆಯಂಥಹ ಗುಣಗಳು ಬೆಳೆಯುತ್ತವೆ. ಸಾಮಾಜಿಕ ಕಳಕಳಿಯನ್ನು ಹೊಂದಿರುವ ವೀರೇಂದ್ರ ಹೆಗ್ಗಡೆಯವರ ಚಿಂತನೆಗಳಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಜನರ ಬದುಕು ಹಸನಾಗುತ್ತಿದೆ.