ದೇವರಾಜ ಅರಸು ಅವರು ನನಗೆ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಜವಾಬ್ದಾರಿ ನೀಡಿದ್ದರು. ಬೆಳಗೆದ್ದು ನಾನು ಯಾರ್ಯಾರ ನೆನೆಯಾಲಿ ಎಂದು ಹಾಡು ಹೇಳಿದರೆ, ನನ್ನ ಹೆತ್ತ ತಂದೆ, ತಾಯಿಯ ಜತೆಗೆ ಡಿ. ದೇವರಾಜ ಅರಸು ಅವರನ್ನು ನೆನೆಯಬೇಕು. ಅವರು ಭೂ ಸುಧಾರಣ ಕಾಯ್ದೆ ಜಾರಿಗೊಳಿಸಿದಾಗ ದಾಖಲಾದ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಹೊಣೆಯನ್ನು ನನಗೆ ನೀಡಿದ್ದರು.
ಇಂದಿನ ವಿದ್ಯಾರ್ಥಿಗಳು ಕೇವಲ ಸಮಯ ವ್ಯರ್ಥ ಮಾಡುವಂತಹ ಮೊಬೈಲ್ ಗೇಮ್, ಮೊಬೈಲ್ ನೊಂದಿಗೆ ಅತಿ ಹೆಚ್ಚು ಸಮಯ ಕಳೆಯುತ್ತಿರುವುದರಿಂದ ಅವರ ಮಾನಸಿಕ ಸ್ಥಿತಿ, ಬೌದ್ಧಿಕ ಮಟ್ಟ, ಶೈಕ್ಷಣಿಕ ವಲಯದಲ್ಲಿ ಅವರ ಸಾಧನೆ, ಆಸಕ್ತಿಯ ಮಟ್ಟ ಕುಸಿಯುತ್ತಿದೆ.
ಪ್ರತಿಯೊಬ್ಬರಿಗೂ ದೇಶವೇ ಮುಖ್ಯವಾಗಿದ್ದು, ಅದರ ಉಳಿವಿಗಾಗಿ ಎಲ್ಲರೂ ಕಂಕಣಬದ್ಧರಾಗಿ ಕೆಲಸ ಮಾಡಬೇಕೆಂದ ಮಾಜಿ ಸಚಿವರು ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದು ನಾಡಿನ ಹಿತಕ್ಕಾಗಿಯೇ ಹೊರತು ಅಧಿಕಾರ ದಾಹದಿಂದಲ್ಲ.
ಸಂವಿಧಾನದ ಮೂಲಕ ಶೋಷಿತ ಸಮುದಾಯದಲ್ಲಿ ಬದಲಾವಣೆಯಾಗುತ್ತಿರುವುದನ್ನು ಮನುವಾದಿಗಳು ಸಹಿಸುತ್ತಿಲ್ಲ. ಹೀಗಾಗಿ, ಪ್ರತ್ಯೇಕ ವ್ಯವಸ್ಥೆ ಅಥವಾ ಸಂವಿಧಾನ ಬದಲಾವಣೆಗೆ ಪ್ರಯತ್ನಗಳಾಗುತ್ತಿವೆ. ಸಂವಿಧಾನವು ಆದಿವಾಸಿ, ದಲಿತ, ಮಹಿಳೆಯರು ಹಾಗೂ ತೃತೀಯ ಲಿಂಗಿಗಳಿಗೆ ಸಮಾನ ಅವಕಾಶ ನೀಡುತ್ತದೆ.
ಶಿಕ್ಷಿತರು ಸಮಾಜದ ಸಮಸ್ಯೆಗೆ ಸ್ಪಂದಿಸಬೇಕು. ಆದ್ದರಿಂದ ಪ್ರತಿಯೊಬ್ಬರು ವೈಜ್ಞಾನಿಕ ಮತ್ತು ವೈಚಾರಿಕ ಶಿಕ್ಷಣ ಪಡೆಯಬೇಕು. ಆಗ ಸಮ ಸಮಾಜದ ಪರಿಕಲ್ಪನೆ ಸಾಧ್ಯವಾಗುತ್ತದೆ. ಪ್ರತಿಯೊಬ್ಬರಿಗೂ ಶಿಕ್ಷಣ ಬಹಳ ಮುಖ್ಯ. ಸ್ವಾತಂತ್ರ್ಯ ಪೂರ್ವದಲ್ಲಿ ಶೇ. 10 ರಿಂದ 15 ರಷ್ಟಿದ್ದ ಸಾಕ್ಷರತೆ ಪ್ರಮಾಣವು ಈಗ ಶೇ.76ಕ್ಕೆ ತಲುಪಿದ್ದು, ಇದು ಶೇ. ನೂರು ಆಗಬೇಕು. ನಾವು ಕಂದಾಚಾರ, ಮೂಢನಂಬಿಕೆಗೆ ಮಾರುಹೋಗಬಾರದು.
ಪ್ರಸ್ತುತ ಕನ್ನಡ ಮಾಧ್ಯಮದ ಶಾಲೆಯನ್ನು ನಡೆಸುವುದು ಕಷ್ಟಸಾಧ್ಯವಾಗಿದೆ. ಗೋಕಾಕ್ ಚಳವಳಿಯ ಕಾಲಕ್ಕೆ ಆರಂಭವಾದ ನೃಪತುಂಗ ಕನ್ನಡ ಮಾಧ್ಯಮ ಶಾಲೆಯನ್ನು ನಡೆಸಲು ಆಗುತ್ತಿರುವ ತೊಂದರೆಯನ್ನು ಅವರು ವಿವರಿಸಿದರು. ಕನ್ನಡವನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ.
ಪಟ್ಟಣದ ಶ್ರೀಕಂಠೇಶ್ವರ ದೇವಾಲಯಕ್ಕೆ ಸೇರಿದ ಮಳಿಗೆಗಳನ್ನು ಬಾಡಿಗೆಗೆ ಪಡೆದ ವ್ಯಾಪಾರಿಗಳು ತಮ್ಮ ವ್ಯಾಪ್ತಿ ಮೀರಿ ಮಳಿಗೆಯ ಹೊರಗೆ ವಸ್ತುಗಳನ್ನು ಇಟ್ಟುಕೊಂಡು ಭಕ್ತರ ಓಡಾಟಕ್ಕೆ ತೊಂದರೆ ಕೊಡುತ್ತಿದ್ದಾರೆ, ದೇವಾಲಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ದೂರುಗಳಿವೆ.
ಸಿದ್ದರಾಮಯ್ಯ ಅವರು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ರಾಜಕೀಯ ತೀರ್ಮಾನವಲ್ಲ, ವೋಟು ಪಡೆಯುವ ತೀರ್ಮಾನ ಅಲ್ಲ, ಜಾತಿ, ಧರ್ಮದ ತೀರ್ಮಾನವೂ ಅಲ್ಲ. ಸಂವಿಧಾನದ ಆಶಯದಂತೆ ಸಮಾನತೆ, ಸಮಾನ ಅವಕಾಶದ ಪೂರಕವಾದ ನಿರ್ಧಾರ.
ಮೈಸೂರಿನಲ್ಲಿ ಯಾವುದೇ ಅನ್ಯಾಯವಾದರೂ ಪ್ರತಿಭಟಿಸುವ ಕೆಲಸ ಮಾಡುತ್ತಿದ್ದ ಮಲ್ಲೇಶ್ ನಮ್ಮನ್ನು ಅಗಲಿದ್ದಾರೆ. ಆದರೆ, ಅವರ ಹೋರಾಟದ ಹಾದಿ ಜೀವಂತವಾಗಿದೆ. ಅಹಿಂದ ವರ್ಗವನ್ನು ಮುನ್ನಲೆಗೆ ತರುವ ಉದ್ದೇಶದಿಂದ ಅನ್ಯಾಯದ ವಿರುದ್ಧ ಹೋರಾಡಿದರು. ನಮ್ಮಲ್ಲೂ ವೈಚಾರಿಕ ಮನೋಭಾವನೆ ಬಿತ್ತಿದರು. ಆದರೆ, ರಾಜಕೀಯಕ್ಕೆ ಬಂದ ಬಳಿಕ ಪೂರ್ಣವಾಗಿ ಅದನ್ನು ಅನುಸರಿಸಲು ಸಾಧ್ಯವಾಗಲಿಲ್ಲ.
ವಾದ್ಯ ವೃಂದದಲ್ಲಿ ಪುರುಷೋತ್ತಮ ಕಿರಗಸೂರು- ಕೀಬೋರ್ಡ್, ತಬಲ- ಕಿರಣ್, ಪ್ರದೀಪ್- ರಿದಂ ಪ್ಯಾಡ್ ಸಾಥ್
mysore