ಅಕ್ರಮ ಭೀತಿ: ಯಾದಗಿರಿ ಪರೀಕ್ಷಾ ಕೇಂದ್ರಗಳೆಲ್ಲ ಬೇರೆ ಜಿಲ್ಲೆಗೆ ಶಿಫ್ಟ್!ಇಂದಿನಿಂದ ನ.25ರವರೆಗೆ ಕೆಇಎಯಿಂದ ವಿವಿಧ ಪರೀಕ್ಷೆಗಳು. 4000 ಅಭ್ಯರ್ಥಿಗಳಿಗೆ ರಾಯಚೂರು, ಕಲಬುರಗಿಯಲ್ಲಿ ಪರೀಕ್ಷೆ. ಕಳೆದ ತಿಂಗಳು ನಡೆದಿದ್ದ ನಿಗಮ-ಮಂಡಳಿಯ ವಿವಿಧ ಹುದ್ದೆಗಳಿಗೆ ಪರೀಕ್ಷೆ. ಅದರಲ್ಲಿ ಬ್ಲೂಟೂತ್ ಬಳಸಿ ವ್ಯಾಪಕ ಅಕ್ರಮ ನಡೆಸಿದ್ದ ಸಂಗತಿ ಬೆಳಕಿಗೆ. ಯಾದಗಿರಿ, ಕಲಬುರಗಿಯಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆದಿದ್ದ ಗೋಲ್ಮಾಲ್. ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಎರಡೂ ಜಿಲ್ಲೆಗಳಲ್ಲಿ ಹಲವರ ಬಂಧನ. ಈಗ ಕೆಇಎಯಿಂದ ನಡೆಯಬೇಕಿರುವ ಇನ್ನಷ್ಟು ಪರೀಕ್ಷೆಗಳಿಗೂ ಅಕ್ರಮದ ಭೀತಿ. ಹೀಗಾಗಿ ಯಾದಗಿರಿಯಲ್ಲಿ ನಿಗದಿಯಾಗಿದ್ದ ಪರೀಕ್ಷೆಗಳು ಬೇರೆಡೆಗೆ ಸ್ಥಳಾಂತರ.