ಮಳೆಗಾಲದಲ್ಲಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಆಗಾಗ್ಗೆ ಬರೆ ಕುಸಿತ ಉಂಟಾಗುವುದು ಸಾಮಾನ್ಯವಾಗಿದ್ದು, ಸಂಚಾರಕ್ಕೆ ತೊಡಕಾಗುವುದು ಮಾತ್ರ ತಪ್ಪುವುದಿಲ್ಲ. ಪ್ರತಿ ಬಾರಿ ಕಾಡುವ ಈ ಸಮಸ್ಯೆ ತಪ್ಪಬೇಕಾದರೆ ಸುಮಾರು 21 ಕಡೆಗಳಲ್ಲಿ ತಡೆಗೋಡೆ ಕಾಮಗಾರಿ ಆಗಬೇಕಾಗಿದೆ.