ಹುಬ್ಬಳ್ಳಿ- ಅಂಕೋಲಾ: ರೈಲು ಮಾರ್ಗಕ್ಕೆ ಕಾಲ ಸನ್ನಿಹಿತಹುಬ್ಬಳ್ಳಿ- ಅಂಕೋಲಾ ಹೆಸರು ಹೇಳುತ್ತಿದ್ದಂತೆ ಥಟ್ಟನೆ ನೆನಪಾಗುವುದು ಹೋರಾಟ. ಹುಬ್ಬಳ್ಳಿ- ಅಂಕೋಲಾ ಮಧ್ಯೆ ರೈಲು ಮಾರ್ಗವಾಗಬೇಕೆಂಬ ಬೇಡಿಕೆ ಬರೋಬ್ಬರಿ ಎರಡುವರೆ ದಶಕದ್ದು. ಸುದೀರ್ಘ ಹೋರಾಟದ ನಡುವೆಯೇ ಈ ರೈಲು ಮಾರ್ಗದ ಬಗ್ಗೆ ರಾಜ್ಯಸಭೆ ಅಧಿವೇಶನದಲ್ಲಿ ಈ ಕುರಿತು ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸುವಾಗ ಕೇಂದ್ರ ರೈಲ್ವೆ ಸಚಿವರು ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಈ ಯೋಜನೆಗೆ ಹಸಿರು ನಿಶಾನೆ ದೊರೆಯುವ ಕಾಲ ಸನ್ನಿಹಿತವಾದಂತಾಗಿದೆ. ಹಾಗಾದರೆ ಈ ಯೋಜನೆ ಏನು?, ಏಕಿಷ್ಟು ಪರಿಸರವಾದಿಗಳ ವಿರೋಧ?, ಪರಿಸರವಾದಿಗಳು ಹೇಳುವಂತೆ ಅರಣ್ಯ ನಾಶವಾಗುತ್ತದೆಯೇ?, ಎಷ್ಟು ಪ್ರಮಾಣದ ಅರಣ್ಯ ನಾಶವಾಗುತ್ತದೆ?, ಈ ಯೋಜನೆಯಿಂದ ಏನೆಲ್ಲ ಉಪಯೋಗ? ಎಂಬುದರ ಕುರಿತು ''ಕನ್ನಡಪ್ರಭ''ದ ಸರಣಿ ಇಂದಿನಿಂದ.