ಪುರಾಣಗಳಿಂದ ಸಂಸ್ಕಾರ, ಜ್ಞಾನ ವೃದ್ಧಿಕನ್ನಡಪ್ರಭ ವಾರ್ತೆ ರೋಣಪುರಾಣಗಳಿಂದ ಜನರಲ್ಲಿ ಸಂಸ್ಕಾರ, ಸಂಸ್ಕೃತಿ, ಜ್ಞಾನ ವೃದ್ಧಿಯಾಗುತ್ತದೆ. ಮನುಷ್ಯ ಯಾವಾಗಲು ಪುರಾಣಗಳನ್ನು ಕೇಳುತ್ತಿರಬೇಕು ಇದರಿಂದ ಆಧ್ಯಾತ್ಮಕ ಅನುಭವವಾಗುತ್ತದೆ ಎಂದು ಬಸವಂತಪ್ಪ.ಎಚ್. ತಳವಾರ ಹೇಳಿದರು.ತಾಲೂಕಿನ ಹುನಗುಂಡಿ ಗ್ರಾಮದ ಶ್ರೀಬಸವೇಶ್ವರ ದೇವಸ್ಥಾನದಲ್ಲಿ ೮೭ನೇ ವರ್ಷದ ಆದಿಶಕ್ತಿ ಶ್ರೀದೇವಮ್ಮನ ಪುರಾಣ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಗ್ರಾಮೀಣ ಪ್ರದೇಶದಲ್ಲಿ ಇನ್ನು ನೀರಿಕ್ಷಿತ ಪ್ರಮಾಣದಲ್ಲಿ ಶೈಕ್ಷಣಿಕ ಪ್ರಗತಿ ಆಗದೇ ಇರುವುದು ನೋವಿನ ಸಂಗತಿ. ಶಿಕ್ಷಣದಿಂದ ಮಾತ್ರ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯ.ಆದ್ದರಿಂದ ಪಾಲಕರು ಕಡ್ಡಾಯವಾಗಿ ತಮ್ಮ ತಮ್ಮ ಮಕ್ಕಳನ್ನು ಶಾಲೆಗೆ ಕಳುಯಿಸುವುದರ ಮೂಲಕ ಅವರನ್ನು ಸಾಕ್ಷರನ್ನಾಗಿ ಮಾಡಬೇಕು.ಅರಿಷ್ಟ ವರ್ಗಗಳನ್ನು ತಿಳಿಸುವ ದೇವಿ ಪುರಾಣವು ಮಾನವನ ದೇಹದ ಪುರಾಣವಾಗಿದೆ. ಈ ಪುರಾಣವನ್ನು ಶ್ರದ್ಧಾ-ಭಕ್ತಿಯಿಂದ ಆಲಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.