ರೈತರ ಸಮಸ್ಯೆ ಆಲಿಸದ ಸರ್ಕಾರದ ವಿರುದ್ಧ ಸಮರರೈತರ ಸಮಸ್ಯೆ ಆಲಿಸದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಹಾಗೂ ರೈತರ ವಿದ್ಯುತ್ ಸಮಸ್ಯೆ, ನೀರಾವರಿ ಸಮಸ್ಯೆ, ಭೂ ಮಂಜೂರು ಹಾಗೂ ರೈತ ವಿರೋಧಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಶೀಘ್ರದಲ್ಲಿ ರೈತ ಸಂಘ ಸಾವಿರಾರು ರೈತರ ಜೊತೆಗೂಡಿ ಗಟ್ಟಿ ಹೋರಾಟ ನಡೆಸಲಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.