ರೈತರು ಸಹಕಾರ ಸಂಸ್ಥೆಗಳಲ್ಲಿ ವಹಿವಾಟು ನಡೆಸಿಸಾಲ ಬೇಕಾದಾಗ ಸಹಕಾರ ಸಂಘಗಳಿಗೆ ಬರುತ್ತೀರಿ, ಆರ್ಥಿಕ ವ್ಯವಹಾರವನ್ನು ಮಾತ್ರ ವಾಣಿಜ್ಯ ಬ್ಯಾಂಕುಗಳಲ್ಲಿ ಮಾಡುತ್ತೀರಿ, ಇದು ಸರಿನಾ? ಸಹಕಾರ ಸಂಸ್ಥೆಗಳಲ್ಲೇ ಖಾತೆ ತೆರೆದು ಒಡವೆ ಸಾಲ, ವಾಹನಗಳ ಸಾಲ, ಮತ್ತಿತರ ವ್ಯವಹಾರಗಳನ್ನು ನಮ್ಮಲ್ಲಿಯೇ ಮಾಡಿ ಎಂದು ಮಾಜಿ ಸಹಕಾರ ಸಚಿವ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ರೈತರಿಗೆ ಹೇಳಿದರು.