ಸಿಎಂಗೆ ಅವಮಾನ ಮಾಡಿದ ಶಾಸಕ ಯಶ್ಪಾಲ್ ಸುವರ್ಣ ಕ್ಷಮೆ ಕೇಳಲಿ: ಜ್ಯೋತಿ ಹೆಬ್ಬಾರ್ಸಂಸ್ಕೃತಿ ಆಚಾರ ವಿಚಾರದ ಕುರಿತು ಸದಾ ಬೊಬ್ಬಿಡುವ ಬಿಜೆಪಿಯ ಮಹಿಳಾ ನಾಯಕರು ರಾಜ್ಯದ ಮುಖ್ಯಮಂತ್ರಿಯೊಬ್ಬರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆಯುತ್ತಿರುವಾಗ ಕಣ್ಣಿದ್ದು ಕುರುಡರಂತೆ ವರ್ತನೆ ಮಾಡಿರುವುದು ಇವರ ನಿಜವಾದ ಸಂಸ್ಕೃತಿ ಯಾವುದು ಎನ್ನುವುದು ಎದ್ದು ಕಾಣಿಸುತ್ತದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಹೆಬ್ಬಾರ್ ಟೀಕಿಸಿದ್ದಾರೆ.