ಹಳ್ಳಿಯಿಂದ ಡೆಲ್ಲಿಗೆ ಹೋಗಿ ಸಾಧನೆ ಮಾಡಿದ ರಾಘವೇಂದ್ರ ನಾಯ್ಕ್!ಪಟ್ಲದ ಯು.ಎಸ್. ನಾಯಕ್ ಪ್ರೌಢಶಾಲೆಯಲ್ಲಿ ಶಿಕ್ಷಣವನ್ನು ಪಡೆದು, ಡಿಪ್ಲೋಮಾ ವ್ಯಾಸಂಗದ ನಂತರ 2005ರಲ್ಲಿ ಉದ್ಯೋಗಕ್ಕಾಗಿ ಬರಿಕೈಯಲ್ಲಿ ದೆಹಲಿಗೆ ಹೋಗಿದ್ದ ರಾಘವೇಂದ್ರ, ಅಲ್ಲಿ ಸ್ವಂತ ಪರಿಶ್ರಮದಿಂದ ಅಕ್ಯೂಟ್ ಲೇಸರ್ ಡೈ ಇಂಡಿಯಾ ಎಂಬ ಕಿರು ಉದ್ದಿಮೆಯನ್ನು ಆರಂಭಿಸಿದರು. ಇಂದು ಈ ಉದ್ದಿಮೆ ಕೇಂದ್ರ ಸರ್ಕಾರದಿಂದಲೇ ಗುರುತಿಸಲ್ಪಡುವಷ್ಟು ದೊಡ್ಡದಾಗಿ ಬೆಳೆದಿದ್ದು, ರಾಘವೇಂದ್ರ ಅವರು ಈ ಸಾಧನೆಯಿಂದ ಇತರ ಯುವಕರಿಗೆ ಮಾದರಿಯಾಗಿದ್ದಾರೆ.