ಕರ್ಣಾಟಕ ಬ್ಯಾಂಕ್ ಕಡ್ತಲ (ವಿತ್ತೀಯ) ಶಾಖೆ ಉದ್ಘಾಟನೆಈ ಶಾಖೆಯ ಹಾಗೂ ಮಿನಿ ಇ-ಲಾಭಿಯ ಉದ್ಘಾಟನೆಯನ್ನು ಮುಖ್ಯ ಅತಿಥಿಗಳಾದ ಜ್ಯೋತಿರ್ವಿಧ್ವಾನ್ ಕೆ.ಪಿ. ಕುಮಾರಗುರು ತಂತ್ರಿಗಳು ನೆರವೇರಿಸಿದರು. ಈ ಸಂದರ್ಭ ಕೈಗಾರಿಕೋದ್ಯಮಿ ಯೋಗೇಶ್ ಮಲ್ಯ, ಸಿವಿಲ್ ಎಂಜಿನಿಯರ್ ಪ್ರಶಾಂತ್ ಬೆಳಿರಾಯ, ನಿವೃತ್ತ ಪ್ರಾಧ್ಯಾಪಕ ಕರುಣಾಕರ ಹೆಗ್ಡೆ, ಬ್ಯಾಂಕ್ ಮುಖ್ಯ ಪ್ರಬಂಧಕ ಮನೋಜ್ ಕೋಟ್ಯಾನ್, ಪ್ರದೀಪ್ ಕುಮಾರ್ ಕೆ.ಆರ್., ಮಹೇಶ್ ಕೆ.ಕೆ., ಇನ್ನಿತರ ಬ್ಯಾಂಕಿನ ಅಧಿಕಾರಿಗಳು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.