ಅರ್ಜಿ ಸಲ್ಲಿಸಿದ್ದ ಬಡವರಿಗೆ ನಿವೇಶನ ನೀಡಲು ಸಿಪಿಎಂ ಆಗ್ರಹನಗರ ವ್ಯಾಪ್ತಿಯ ಬಡವರು ನಿವೇಶನಕ್ಕಾಗಿ 2015ರಲ್ಲಿ ಸಲ್ಲಿಸಿದ್ದ 8000 ಅರ್ಜಿಗಳಿಗೆ ನಿವೇಶನ ಹಂಚಿಕೆ ಮಾಡಬೇಕು ಮತ್ತು ಪ್ರಸ್ತುತ ಆನ್ ಲೈನ್ ತಂತ್ರಾಂಶಗಳ ಮೂಲಕ ಅರ್ಜಿ ಸಲ್ಲಿಸಲು ಜು. 15ರ ಗಡುವು ವಾಪಾಸ್ ಪಡೆದು ಅವಧಿ ವಿಸ್ತರಿಸಬೇಕು ಎಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ (ಸಿಪಿಎಂ) ಹೊಸಪೇಟೆ ತಾಲೂಕು ಸಮಿತಿಯಿಂದ ನಗರಸಭೆ ಪೌರಾಯುಕ್ತ ಸಿ. ಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.