ವಕ್ಫ್ಗೆ ಲಕ್ಷಾಂತರ ಎಕರೆ ದಾನ ಮಾಡಿದವರ ಹೆಸರು ಬಹಿರಂಗಪಡಿಸಿಕನ್ನಡಪ್ರಭ ವಾರ್ತೆ ವಿಜಯಪುರ ಜಿಲ್ಲೆಯಲ್ಲಿನ 15,000 ಎಕರೆ, ರಾಜ್ಯದ 1,12,000 ಎಕರೆ ಹಾಗೂ ದೇಶದಲ್ಲಿನ 9,46,000 ಎಕರೆ ಜಮೀನನ್ನು ಯಾವ ಮುಸ್ಲಿಮರು ವಕ್ಫ್ ಬೋರ್ಡ್ಗೆ ದಾನ ನೀಡಿದರು? ಯಾವಾಗ ನೀಡಿದರು? 2009ರಲ್ಲಿ 4,00,000 ಎಕರೆ ಇದ್ದ ವಕ್ಫ್ ಆಸ್ತಿ ಇಂದು 9,46,000 ಎಕರೆ ಹೇಗಾಯಿತು? ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸ್ವಾಮಿ ವಿವೇಕಾನಂದ ಸೇನೆ ರಾಜ್ಯಾಧ್ಯಕ್ಷ ರಾಘವ ಅಣ್ಣಿಗೇರಿ ಕಾಂಗ್ರೆಸ್ಗೆ ಆಗ್ರಹಪಡಿಸಿದರು.