ವಿಷಕಾರಿ ಕಂಪನಿಗಳ ಅನುಮತಿ ರದ್ದತಿಗೆ ನಿರ್ಣಯ ?ಯಾದಗಿರಿ: ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಅಪಾಯಕಾರಿ ಕೆಮಿಕಲ್ ತ್ಯಾಜ್ಯ ಕಂಪನಿಗಳಿಂದಾಗುತ್ತಿರುವ ದುಷ್ಪರಿಣಾಮ ಕುರಿತು ಗ್ರಾಮಗಳಲ್ಲಿ ಈಗ ಜಾಗೃತಭಾವ ಮೂಡತೊಡಗಿದೆ. ಕಾನೂನುರೀತ್ಯ ಗ್ರಾಮ-ಸಭೆಗಳ ಮೂಲಕ ಅನುಮತಿ ರದ್ದಿಗೆ ನಿರ್ಣಯ ಕೈಗೊಳ್ಳಲು ಹೋರಾಟಗಳು ಜನಮಾನಸದಲ್ಲಿ ಚಿಗುರೊಡೆಯುತ್ತಿವೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರಾದಿಯಾಗಿ ಠರಾವು ಪಾಸ್ ಮಾಡಲು ಒಲವು ತೋರುತ್ತಿದ್ದಾರೆ. ಗಲ್ಲಿಗಲ್ಲಿಗಳಲ್ಲಿ ಮನಸ್ಸುಗಳು ಜಾಗೃತಗೊಳ್ಳುತ್ತಿವೆ. ಜನವಿರೋಧಕ್ಕೆ ಬೆವೆತಿರುವ ಕೆಲವು ಕಂಪನಿ ಮಾಲೀಕರು ಈಗ ಬಂದು ನೀಡುತ್ತಿರುವ ಭರವಸೆಗಳಿಗೆ, ಆಸೆ ಆಮಿಷಗಳ ಬಿಟ್ಟಾಕಿ ಅವರ ವಾಪಸ್ ಕಳುಹಿಸುತ್ತಿದ್ದಾರೆ. ಒಂದೊಂದಾಗಿ ಒಂದಿಷ್ಟು ಬೆಳವಣಿಗೆಗಳು ಚಿಗುರತೊಡಗಿವೆ.