1.5 ಲಕ್ಷ ಹೆಕ್ಟೇರ್ ಪ್ರದೇಶ: ₹100 ಕೋಟಿ ಬೆಳೆಹಾನಿ !ತಿಂಗಳಿನಿಂದ ಕಾಡುತ್ತಿದ್ದ ಅತಿವೃಷ್ಟಿ ಹಾಗೂ ಪ್ರವಾಹದ ಭೀತಿ ತಗ್ಗಿದೆ. ಜಲಾವೃತಗೊಂಡಿದ್ದ ಗ್ರಾಮಗಳಲ್ಲಿ ನೀರಿನ ಹರಿವು ಇಳಿಮುಖವಾಗಿದೆ. ಮನೆ-ಮಠಗಳಲ್ಲಿ ನುಗ್ಗಿದ್ದ ನೀರಿನಿಂದಾಗಿ ನೀರುಪಾಲಾಗಿದ್ದ ಆಸ್ತಿ-ಪಾಸ್ತಿ ಸಂರಕ್ಷಿಸಿಕೊಳ್ಳುವಲ್ಲಿ ಜನ ಹರಸಾಹಸ ಪಡುತ್ತಿದ್ದಾರೆ. ಕಾಳಜಿ ಕೇಂದ್ರಗಳಿಂದ ಜನರು ಮನೆಗೆ ಆತಂಕದಿಂದಲೇ ಮರಳುತ್ತಿದ್ದು, ಹಾನಿ ಕಂಡು ಮಮ್ಮುಲ ಮರುಗುತ್ತಿದ್ದಾರೆ.