ಸೈದಾಪುರದಲ್ಲಿ ಭಾರತೀಯ ಸೈನಿಕರ ಸಾಹಸಗಾಥೆ ಅನಾವರಣಸಮೀಪದ ಸೈದಾಪುರ ಪಟ್ಟಣದಲ್ಲಿ ಗುರುವಾರ ಬೆಳಿಗ್ಗೆ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಭಾಗವಹಿಸಿದ್ದ ಜನರು ದೇಶ ಭಕ್ತಿಯನ್ನು ಸಾರುವ ಘೋಷಣೆಗಳ ಜೊತೆಗೆ ದೂದ್ ಮಾಂಗೋ ಖೀರ್ ದೇಂಗೆ, ಕಾಶ್ಮೀರ ಮಾಂಗೋ ತೋ ಛೀರ್ ದೇಂಗೆ ಎಂದು ಉದ್ಘೋಷಿಸುವ ಮೂಲಕ ಗಡಿ ಕಾಯುವ ಸೈನಿಕರ ಜತೆಗೆ ಈ ರಾಷ್ಟ್ರದ ಪ್ರತಿಯೊಬ್ಬ ನಾಗರಿಕರು ಜತೆಗಿದ್ದೇವೆ ಎಂಬ ಸಂದೇಶವನ್ನು ರವಾನಿಸುವ ಮೂಲಕ ಇಲ್ಲಿ ಭಾರತೀಯ ಸೈನಿಕರ ಹೋರಾಟದ ಯಶೋಗಾಥೆ ಅನಾವರಣಗೊಂಡಿತು.