ವಚನ ಸಾಹಿತ್ಯದಿಂದ ಸಮಾಜದಲ್ಲಿ ಪರಿವರ್ತನೆ ಸಾಧ್ಯಬಸವಾದಿ ಶರಣರು ವಚನಗಳ ಮೂಲಕ ಇಡೀ ಸಮಾಜದಲ್ಲೊಂದು ಪರಿವರ್ತನೆ ತರುವ ಪ್ರವರ್ತಕರಾದರು. ಜಾತಿ, ವರ್ಗ, ಲಿಂಗ, ಪಂಥ ಮುಂತಾದ ತಾರತಮ್ಯಗಳ ವಿರುದ್ಧ ಸಿಡಿದೆದ್ದು ಶೋಷಿತರ ಧ್ವನಿಯಾಗಿ ಬಸವಾದಿ ಶರಣರು ರೂಪಸಿದ ಚಳವಳಿ ಒಂದು ಐತಿಹಾಸಿಕ ಕಾರ್ಯವಾಗಿದೆ. ಜಿಡ್ಡುಗಟ್ಟಿದ ಸಮಾಜಕ್ಕೆ ಹೊಸ ಸ್ಪರ್ಶವನ್ನು ನೀಡಿದರು ಎಂದು ಶಹಾಪುರದ ಏಕದಂಡಗಿ ಮಠದ ಅಜೇಂದ್ರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು