ರಾಮಾಯಣ, ಮಹಾಭಾರತ ಹಾಗೂ ಕುರಾನ್ ಅಂತೆಕಂತೆಗಳ ಬೊಂತೆ ಆಗಿದ್ದು, ನಮ್ಮ ಸಂವಿಧಾನವೇ ಕಣ್ಣಿಗೆ ಕಾಣುವ ಸರ್ವ ಜನರ ಸುಖ ಬಯಸುವ ಧರ್ಮಗ್ರಂಥ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಕೇಂದ್ರ ಸರ್ಕಾರದ ಬರ ಪರಿಹಾರ ಸಮಿತಿಯ ಅಧ್ಯಕ್ಷರಾದ ಅಮಿತ್ ಶಾ ಇದುವರೆಗೆ ಈ ಸಂಬಂಧ ಒಂದು ಸಭೆ ನಡೆಸಿಲ್ಲ. ನರೇಗಾ ಯೋಜನೆಯಡಿ ಮಾನವ ದಿನಗಳನ್ನು ಹೆಚ್ಚಿಸಲು ಪತ್ರ ಬರೆದರೂ ಪರಿಗಣಿಸಿಲ್ಲ. ಈಗ ಕರ್ನಾಟಕಕ್ಕೆ ಬರುವಾಗಲೂ ಬರ ಪರಿಹಾರ ಘೋಷಿಸದೆ ಬರಿಗೈಲಿ ಬಂದಿದ್ದಾರೆ ಎಂದು ಸಿದ್ಧರಾಮಯ್ಯ ತಿಳಿಸಿದರು.
ನರೇಂದ್ರ ಮೋದಿ ಪ್ರಧಾನಿಯಾಗಿ ಹತ್ತು ವರ್ಷಗಳಾದರೂ ದೇಶದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಇನ್ನೂ ಬಡತನ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದರು.