ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯು, ಕರ್ನಾಟಕ ಕೈಗಾರಿಕಾ ಉದ್ಯೋಗ ನಿಯಮಗಳಲ್ಲಿ ತಿದ್ದುಪಡಿ ತರುವುದರ ಮೂಲಕ, ಸಿ ಮತ್ತು ಡಿ ಗುಂಪಿನ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇಕಡಾ 100ರಷ್ಟು ಮೀಸಲಾತಿ ಜಾರಿಗೊಳಿಸಲು ಮುಂದಾಗಿದೆ. ಇದು ಐತಿಹಾಸಿಕ ಮತ್ತು ಸ್ವಾಗತಾರ್ಹ ನಿರ್ಧಾರ.
ಅಂಬೇಡ್ಕರ್ ಕುರಿತು ಜನರಿಗೆ ಗೊತ್ತಿರುವುದು ಸಂವಿಧಾನ ಶಿಲ್ಪಿ, ಮೀಸಲಾತಿ ಜನಕ, ದಲಿತರ ನಾಯಕ, ಮನುಸ್ಮೃತಿ ಸುಟ್ಟವರು, ಬೌದ್ಧಧರ್ಮ ಸೇರಿದವರು, ಪ್ರತಿಮೆಯಾಗಿರುವವರು- ಇಷ್ಟು ವಿಚಾರಗಳು ಮಾತ್ರ. ಅಂಬೇಡ್ಕರ್ ಅವರ ಕೊಡುಗೆಗಳು ಅದರಾಚೆಗೂ ಇವೆ ಎಂಬುದನ್ನು ಅಪ್ಪಗೆರೆ ಸೋಮಶೇಖರ್ ನಿರೂಪಿಸಿದ್ದಾರೆ.
ಅಂತರಜಾತಿ ವಿವಾಹ ಮತ್ತು ಸಾಮಾಜಿಕ ಸಮಾನತೆ ಕೃತಿಯಲ್ಲಿ ಹತ್ತು ಹಲವು ಲೇಖನಗಳಿವೆ. ಕಳೆದ ವರ್ಷ ಕಾರ್ಯಕ್ರಮದಲ್ಲಿ ಗಣ್ಯರು ಮಾಡಿದ ಭಾಷಣಕ್ಕೆ ಅಕ್ಷರರೂಪ ನೀಡಿ ಪ್ರಕಟಿಸಲಾಗಿದೆ.