ಹುಲಿತಿಮ್ಮಾಪುರದ ತೋಟಗಳಿಗೆ ಕಾಡಾನೆ ದಾಳಿ: ಅಡಕೆ ಬಾಳೆ ನಾಶ
Mar 03 2024, 01:30 AM ISTತಾಲೂಕಿನ ಲಿಂಗದಹಳ್ಳಿ ಹೋಬಳಿ ಹುಲಿತಿಮ್ಮಾಪುರ ಗ್ರಾಮದ ಬಳಿ ಇರುವ ಸ.ನಂ.42 /1 ವಾಹಿದಾ ಬಾನು ಅವರ ತೋಟದಲ್ಲಿ ಮತ್ತು ಸ.ನಂ.42/ 5 ನಲ್ಲಿ ಸಫಿಯಾ ಬಾನು ಅವರ ತೋಟದಲ್ಲಿ ಸುಮಾರು ಒಟ್ಟು ಐದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಡಿಕೆ, ಬಾಳೆ ತೋಟಕ್ಕೆ ಶುಕ್ರವಾರ ಕಾಡಾನೆಗಳು ನುಗ್ಗಿ ತೋಟದಲ್ಲಿ ಬೆಳೆದಿದ್ದ ಅಡಕೆ ಮತ್ತು ಬಾಳೆ ಗಿಡ ಗಳನ್ನು ಸಂಪೂರ್ಣವಾಗಿ ತುಳಿದು ಬೆಳೆ ನಾಶ ಮಾಡಿವೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಲಿಂಗದಹಳ್ಳಿ ಎ.ಅಬ್ದುಲ್ ರೆಹಮಾನ್ ತಿಳಿಸಿದ್ದಾರೆ.