ಕಾಮಗಾರಿಗಾಗಿ ರಸ್ತೆ ಬಂದ್‌ ಮಾಡಿದ ರೈಲ್ವೆ ಇಲಾಖೆ

Oct 28 2025, 12:18 AM IST
ರಸ್ತೆ ಮತ್ತು ಚರಂಡಿಯನ್ನು ಪುರಸಭೆ ವತಿಯಿಂದ ನಿರ್ಮಿಸಿ ಬಡಾವಣೆಯ ನಿವಾಸಿಗಳಿಗೆ ಅನುಕೂಲ ಕಲ್ಪಿಸಲಾಗಿತ್ತು, ಆದರೆ ರೈಲ್ವೆ ಇಲಾಖೆ ವತಿಯಿಂದ ಇತ್ತೀಚೆಗೆ ಕಾಮಗಾರಿ ನಡೆಸುವ ಸಲುವಾಗಿ ಚರಂಡಿ ಹಾಗೂ ರಸ್ತೆಯನ್ನು ಅಗೆದಿರುವುರಿಂದ ಇಲ್ಲಿನ ಜನರು ತೀವ್ರ ತೊಂದರೆ ಅನುಭವಿಸುವಂತೆ ಆಗಿದೆ. ರೈಲ್ವೆ ಇಲಾಖೆ ಮಾಡಿರುವ ಕಾಮಗಾರಿಯಿಂದ ಚರಂಡಿಗೆ ಮಣ್ಣು ತುಂಬಿದೆ. ಜನತಾ ಕಾಲೋನಿಯ ನಿವಾಸಿಗಳ ಮನೆಯಿಂದ ಹೊರ ಹೋಗುವ ತ್ಯಾಜ್ಯದ ನೀರು ಚರಂಡಿ ಮೂಲಕ ಹೊರ ಹೋಗುತ್ತಿತ್ತು, ಈಗ ಚರಂಡಿ ಮುಚ್ಚಿರುವ ಕಾರಣದಿಂದ ಸಮಸ್ಯೆ ಉಲ್ಪಣಿಸಿದೆ ಜತೆಗೆ ದಿನನಿತ್ಯ ಬಳಕೆಯ ರಸ್ತೆಯನ್ನು ಸಹ ಕಾಮಗಾರಿ ಸಲುವಾಗಿ ಕಿತ್ತು ಹಾಕಿದ್ದು, ಓಡಾಡಲು ಅಗದಂತಹ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ.