ರಾಮನಾಥಪುರದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ
Aug 16 2025, 12:00 AM ISTರಾಮನಾಥಪುರದ ಶ್ರೀ ಬಸವೇಶ್ವರ ವೃತ್ತದಲ್ಲಿರುವ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೇರವೇರಿಸಿದ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಭಾರತದ ರಾಷ್ಟ್ರಧ್ವಜವು ಏಕತೆ, ಸ್ವಾತಂತ್ರ, ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿದೆ. ರಾಷ್ಟ್ರಧ್ವಜ ವಿವಿಧ ಧರ್ಮ, ವಿವಿಧ ಪ್ರದೇಶ ಮತ್ತು ವಿವಿಧ ಸಂಸ್ಕೃತಿಗಳು ಒಂದು ಸಂಕೇತದ ಅಡಿಯಲ್ಲಿ ಒಂದಾಗಿರುವುದನ್ನು ಸೂಚಿಸುತ್ತದೆ ಎಂದು ಕೃಷ್ಣೇಗೌಡರು ತಿಳಿಸಿದರು. ಮಹನೀಯರನ್ನು ಸ್ಮರಿಸವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಗೌರವಾಧ್ಯಕ್ಷರಾದ ಎಸ್.ಟಿ. ಕೃಷ್ಣೇಗೌಡರು ತಿಳಿಸಿದರು.