ದೇಹದಾನ ಜೀವದಾನಕ್ಕೆ ಸಮಾನ: ಡಾ.ಸಂಜೀವ್ ಗೌರಬಾಗಲಕೋಟೆ: ನಗರದ ಎಂ.ಆರ್.ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಸುವಾಚ ಜ್ಞಾನದೀಕ್ಷ ಹಾಗೂ ದೇಹದಾನ ಸ್ವೀಕಾರ ಸಮಾರಂಭ ನಡೆಯಿತು. ಡಾ.ಸಂಜೀವ್ ಗೌರ ಮಾತನಾಡಿ, ಜನಮಾನಸದಲ್ಲಿ ದಾನಗಳಿಗೆ ಪ್ರಸಿದ್ಧಿ ಪಡೆದ ಭಾರತದಲ್ಲಿ ದೇಹದಾನವು ಜೀವದಾನವಾಗಿ ಮಾರ್ಪಟ್ಟಿದೆ ಎಂದರು. ಡಾ.ಮಹಾಂತೇಶ ರಾಮಣ್ಣವರ, ಸಂಸ್ಥೆಯ ಅಧ್ಯಕ್ಷೆ ಮಾಧುರಿ ಮುಧೋಳ ಇತರರು ಇದ್ದರು.