ವಸತಿ ನಿಲಯಗಳಲ್ಲಿನ ಅವ್ಯವಸ್ಥೆ ಸರಿಪಡಿಸಿರಾಮದುರ್ಗತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಗುಣಮಟ್ಟದ ಆಹಾರ ನೀಡುತ್ತಿಲ್ಲವೆಂಬ ಸಾಕಷ್ಟು ದೂರುಗಳಿವೆ. ಅಧಿಕಾರಿಗಳು ಉಸ್ತುವಾರಿ ಮಾಡಿ ಸರಿಪಡಿಸಬೇಕು ಹಾಗೂ ಅಡುಗೆಯವರು ಆಹಾರ ಸಾಮಗ್ರಿ ಮನೆಗೆ ತೆಗೆದುಕೊಂಡು ಹೋಗುತ್ತಾರೆಂದು ವಿದ್ಯಾರ್ಥಿಗಳ ಆರೋಪ ಕೇಳಿ ಬರುತ್ತಿದೆ. ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸರ್ಕಾರದ ಮುಖ್ಯಸಚೇತಕ, ಶಾಸಕ ಅಶೋಕ ಪಟ್ಟಣ ಸೂಚಿಸಿದರು.