ಇ- ಟೆಂಡರ್ ಪದ್ಧತಿ ಹಳ್ಳಿಗೂ ವಿಸ್ತರಿಸಲು ಎಪಿಎಂಸಿಗೆ ಒತ್ತಾಯದಾವಣಗೆರೆ ಎಪಿಎಂಸಿಯಲ್ಲಿ ಇ-ಟೆಂಡರ್ ಪದ್ಧತಿ ಜಾರಿಗೊಂಡ ನಂತರ ರೈತರ ಉತ್ಪನ್ನಗಳ ಧಾರಣೆ ಏರಿಕೆಯಾಗಿದ್ದು, ಅನ್ನದಾತರ ಪಾಲಿಗೆ ವರವಾಗಿರುವ ಇ-ಟೆಂಡರ್ ಪದ್ಧತಿಯನ್ನು ಗ್ರಾಮೀಣ ಭಾಗಕ್ಕೂ ವಿಸ್ತರಿಸುವಂತೆ ಜಿಲ್ಲಾ ರೈತರ ಒಕ್ಕೂಟದ ಮುಖಂಡರಾದ ಬಿ.ಎಂ.ಸತೀಶ ಕೊಳೇನಹಳ್ಳಿ, ಬೆಳವನೂರು ಬಿ.ನಾಗೇಶ್ವರ ರಾವ್ ಒತ್ತಾಯಿಸಿದ್ದಾರೆ.