ಲಗಾನ್ ಟೀಂಗೆ ಬ್ರೇಕ್ ಹಾಕಿ, ಜಿಲ್ಲಾಧ್ಯಕ್ಷರ ಬದಲಾಯಿಸಿ!ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ಕಾರಣವಾದ ಲಗಾನ್ ಟೀಂಗೆ ಅಮಾನತುಪಡಿಸಬೇಕು, ಪಕ್ಷದ ಜಿಲ್ಲಾಧ್ಯಕ್ಷರ ಬದಲಾವಣೆ, ವಿಧಾನಸಭೆ ಚುನಾವಣೆಗೆ ಈಗಲೇ ಪರಸ್ಪರ ಪಕ್ಷದ ಟಿಕೆಟ್ ಘೋಷಣೆ ಮಾಡಿಕೊಳ್ಳುತ್ತಿರುವವರಿಗೆ ಬ್ರೇಕ್ ಹಾಕುವಂತೆ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ. ಹರೀಶ ನೇತೃತ್ವದ ತಂಡ ಪಕ್ಷದ ರಾಜ್ಯ ಉಸ್ತುವಾರಿ ಡಾ.ರಾಧಾಮೋಹನದಾಸ್ ಅಗರವಾಲ್ ಹಾಗೂ ಕೋರ್ ಕಮಿಟಿ ಮುಂದೆ ಪಟ್ಟುಹಿಡಿದಿದೆ.