ಪ್ರದರ್ಶನ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ಬೇಕಿದೆಇಂದಿನ ಮಕ್ಕಳು ಕಂಪ್ಯೂಟರ್, ಮೊಬೈಲ್ ದಾಸರಾಗಿದ್ದಾರೆ. ಅದರಿಂದ ಸ್ವತಂತ್ರ ಆಲೋಚನೆ, ಕ್ರೀಯಾಶೀಲತೆ, ದೈಹಿಕ ಶ್ರಮ ಮರೆತಿದ್ದಾರೆ. ಇದಕ್ಕೆಲ್ಲ ನೃತ್ಯ, ಗಾಯನ, ನಾಟಕ, ದೊಡ್ಡಾಟ, ಸಣ್ಣಾಟ ಮುಂತಾದ ಕಲೆಗಳು ದಿವ್ಯೌಷಧಿ ಆಗಿವೆ. ಓದಿನ ಜತೆಗೆ ಈ ಕಲೆಗಳ ಅಭ್ಯಾಸ ಮುಂದುವರೆಸಿದರೆ ಬೌದ್ಧಿಕ ಬೆಳವಣಿಗೆಯ ಜತೆಗೆ ಸಂವೇಧನಾಶೀಲ ಮನಸು ಹೊಂದಿ ಸುಸಂಸ್ಕೃತ ಪ್ರಜೆಗಳಾಗುತ್ತಾರೆ. ಹಾಗಾಗಿ ಪಾಲಕರು ತಮ್ಮ ಮಕ್ಕಳಿಗೆ ಈ ಜನಪದ ಕಲೆಗಳನ್ನು ಕಲಿಸಲು ಮುಂದಾಗಬೇಕು.