ಚರ್ಚೆ ಬಳಿಕ ಜಿಲ್ಲಾ ವರದಿಗಾರರ ಕೂಟಕ್ಕೆ ಕೆಂಪು ಕಟ್ಟಡ: ಡಿಸಿ ಭರವಸೆದಾವಣಗೆರೆ ಜಿಲ್ಲಾ ವರದಿಗಾರರ ಕೂಟಕ್ಕೆ ಪಾಲಿಕೆ ಹಿಂಭಾಗದ ಕೆಂಪು ಕಟ್ಟಡವೆಂದೇ ಹೆಸರಾಗಿರುವ ಕಟ್ಟಡವನ್ನು ನೀಡುವಂತೆ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ಕೂಟದಿಂದ ಮನವಿ ಅರ್ಪಿಸಲಾಯಿತು. ಈ ಸಂದರ್ಭ ಡಿಸಿ ಪ್ರತಿಕ್ರಿಯಿಸಿ, ಕಟ್ಟಡ ದುರಸ್ತಿಪಡಿಸಿ, ಪೇಂಟಿಂಗ್ ಬಳಿಕ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.