ಸಂತೋಷ ಉಪಮೇಯರ್? ಮೇಯರ್ ಸ್ಥಾನಕ್ಕೆ ಜ್ಯೋತಿ, ಪೂಜಾ ಪೈಪೋಟಿಬಿಜೆಪಿಯಲ್ಲಿ ಮೇಯರ್- ಉಪಮೇಯರ್ಗಾಗಿ ಕಳೆದ ಹದಿನೈದು ದಿನಗಳಿಂದ ತೀವ್ರ ಲಾಬಿ ನಡೆಯುತ್ತಿದೆಯಾದರೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಇಬ್ಬರು ಊರಲ್ಲಿ ಇರಲಿಲ್ಲ. ಹೀಗಾಗಿ ಅಷ್ಟೊಂದು ರಂಗು ಬಂದಿರಲಿಲ್ಲ. ಇದೀಗ ಭಾನುವಾರ ರಾತ್ರಿ ಇಬ್ಬರು ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ಸಚಿವ ಜೋಶಿ, ಶಾಸಕರಾದ ಬೆಲ್ಲದ, ಮಹೇಶ ಟೆಂಗಿನಕಾಯಿ ಮೂವರು ಪಾಲಿಕೆ ಸದಸ್ಯರೊಂದಿಗೆ ಸಭೆ ನಡೆಸಿದ್ದಾರೆ.