ರೈತರಿಗೆ ನೀರು ಹಂಚುವುದೇ ಸಂಸದರ ಕೆಲಸವಲ್ಲ ಜಿಲ್ಲೆಯಲ್ಲಿ ಇನ್ನೂ ೧,೪೨,೦೦೦ ಕ್ವಿಂಟಲ್ ಕೊಬ್ಬರಿ ಬಾಕಿಯಿದ್ದು, ಕ್ಯೂನಲ್ಲಿ ನಿಂತ ರೈತರಿಗೆ ನೀರು ಹಂಚಿ ಸಮಾಧಾನ ಹೇಳುವುದಷ್ಟೇ ಅಲ್ಲ. ಸಂಸದರಾದವರು ಕೇಂದ್ರದಲ್ಲಿ ಜಾಂಡಾ ಹೂಡಿ ಬಾಕಿ ಉಳಿದಿರುವ ಎಲ್ಲಾ ಕೊಬ್ಬರಿಯನ್ನೂ ಖರೀದಿಸುವಂತೆ ಕೇಂದ್ರದ ಮೇಲೆ ಒತ್ತಡ ತರಬೇಕು. ಆ ಮೂಲಕ ಸಂಸದರ ಜವಾಬ್ದಾರಿ ಏನು ಎನ್ನುವುದನ್ನು ತೋರಿಸಲಿ ಎಂದು ಶಾಸಕ ಹಾಗೂ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ ಶಿವಲಿಂಗೇಗೌಡ ಒತ್ತಾಯಿಸಿದರು.