ರಸ್ತೆ ಅಭಿವೃದ್ಧಿಗೆ ಮುಂದಾದ ನಗರಸಭೆ ಅಧ್ಯಕ್ಷ ಸಮೀವುಲ್ಲಾಶ್ರೀನಿವಾಸನಗರ ಸೇರಿದಂತೆ ಚೌಡೇಶ್ವರಿ ನಗರ, ಇಂದಿರಾನಗರ, ಹೊಯ್ಸಳ ನಗರ ಹೀಗೆ ಈ ಭಾಗದಲ್ಲಿ ಬರುವ ಹತ್ತಾರು ಬಡಾವಣೆಗಳ ಜನತೆಗೆ ಗರುಡಗಿರಿ ರಸ್ತೆಯಿಂದ ಟಿ ಎಚ್ ರಸ್ತೆಗೆ ನೇರವಾಗಿ ಸಂಚಾರ ಮಾಡಲು ನಗರಸಭೆ ರಸ್ತೆ ನಿರ್ಮಿಸಿ ಕೊಟ್ಟರೆ ಈ ಭಾಗದ ಜನತೆಗೆ ಅನುಕೂಲವಾಗುವುದಲ್ಲದೆ ಈ ಬಡಾವಣೆಗಳ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಮನವಿ ಮಾಡಿದ ಹಿನ್ನೆಲೆ ಗರುಡನಗಿರಿ ರಸ್ತೆಯಿಂದ ಶ್ರೀನಿವಾಸ ನಗರ ಬಡಾವಣೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 206 ಟಿ ಎಚ್ ರಸ್ತೆಗೆ ಸಂಪರ್ಕಿಸುವ ನೇರ ರಸ್ತೆ ಅಭಿವೃದ್ಧಿಗೆ ನಗರಸಭೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಅಧ್ಯಕ್ಷ ಎಂ ಸಮಿವುಲ್ಲಾ ಹೇಳಿದರು.