• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ರಥ ನಿರ್ಮಾಣಕ್ಕೆ ಶಾಸಕರಿಂದ ಹೆಚ್ಚಿನ ಸಹಕಾರದ ಭರವಸೆ

ಗ್ರಾಮದ ಶ್ರೀ ಸಂತೆಕಾಳೇಶ್ವರಿ ಶ್ರೀ ಚಿಕ್ಕಮ್ಮ ದೇವಿಯವರ ದೇವಾಲಯದಲ್ಲಿ ಶನಿವಾರ ನಡೆದ 48ನೇ ದಿನದ ಮಂಡಲ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು 

ನೂತನ ಬಡಾವಣೆಗಳ ನಿರ್ಮಾಣಕ್ಕೆ ಜನರ ಸಹಕಾರ ಬೇಕು
ಪೂರ್ಣ ಪ್ರಮಾಣದಲ್ಲಿ ಮನೆಗಳು ನಿರ್ಮಾಣವಾದ ನಂತರ ಇನ್ನಷ್ಟು ಸೌಲಭ್ಯ ದೊರೆಯುತ್ತವೆ. ಕುಡಿಯುವ ನೀರಿನ ವ್ಯವಸ್ಥೆಯು ಶೀಘ್ರದಲ್ಲಿಯೇ ಆಗಲಿದೆ. ಮನೆಗಳ ನಡುವೆಯೇ ಇರುವ ಸ್ಮಶಾನವನ್ನು ತೆರವುಗೊಳಿಸಿ ಅಲ್ಲಿ ಉದ್ಯಾನವನ ನಿರ್ಮಾಣ ಮಾಡುವ ಚಿಂತನೆ ಇದೆ. ಇದರಿಂದ ನಾಗರಿಕರಿಗೂ ಅನುಕೂಲವಾಗಲಿದೆ. ಪುರಸಭೆ ತೆರಿಗೆ ಅನುದಾನದಲ್ಲಿ ಪ್ರತಿವರ್ಷ ಸುಮಾರು ಏಳು ಕೋಟಿ ರು. ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು. ಹೊಸ ಬಡಾವಣೆಗಳ ನಾಗರಿಕರು ಅಲ್ಲಿನ ಅಭಿವೃದ್ಧಿಗೆ ಪುರಸಭೆಯೊಂದಿಗೆ ಸಹಕರಿಸಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಮಕ್ಕಳಿಗೆ ದೇಶಾಭಿಮಾನದ ಪಾಠ ಹೇಳಿಕೊಡಿ
ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ನಮ್ಮ ದೇಶದ ಬಗ್ಗೆ ಅಭಿಮಾನದ ಪಾಠ ಹೇಳಿಕೊಡುವಂತೆ ಪೋಷಕರಲ್ಲಿ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷರಾದ ನಾಗಭೂಷಣ್ ಹಾಗೂ ಧರ್ಮರಾಜ್ ತಿಳಿಸಿದರು. ಇತ್ತೀಚೆಗೆ ೨೬ ಪ್ರವಾಸಿಗರನ್ನು ಹತ್ಯೆ ಮಾಡಿದ್ದ ಉಗ್ರರ ವಿರುದ್ಧ ಸಿಡಿದು ಆ ದೇಶಕ್ಕೆ ನುಗ್ಗಿ ಪಾಕಿಸ್ತಾನವನ್ನು ಆಪರೇಷನ್ ಸಿಂದೂರ ಎಂಬ ಹೆಸರಿನಲ್ಲಿ ಆದೇಶಕ್ಕೆ ನುಗ್ಗಿ ಅವರನ್ನು ಬಗ್ಗು ಬಡಿದಿದ್ದು ನಾವು ದೇಶದ ಹೊರಭಾಗದಲ್ಲಿರುವಂತಹ ದೇಶದ್ರೋಹಿಗಳನ್ನು ಹೊಡೆದೋಡಿಸಿ ಜೊತೆಗೆ ನಮ್ಮ ದೇಶದ ಒಳಗಿರುವವರಿಗೂ ನಾವು ತಕ್ಕ ಶಾಸ್ತಿ ಮಾಡಬೇಕೆಂದರು.
ವಿಜೃಂಭಣೆಯ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ
ಅರಸೀಕೆರೆ ನಗರದ ಮೈಸೂರು ರಸ್ತೆ ಶ್ರೀವಿದ್ಯಾನಗರದ ಶ್ರೀಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀವಿಷ್ಣು ಪಂಚಾಯತನ ವೈಶಿಷ್ಟತೆಯಲ್ಲಿ ನೂತನವಾಗಿ ನಿರ್ಮಿಸಿರುವ ಸುಕ್ಷೇತ್ರದ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಹಾಗೂ ಪರಿವಾರ ದೇವತೆಗಳ ಪ್ರತಿಷ್ಠಾಪನಾ ವರ್ಧಂತಿ, ಶ್ರೀನರಸಿಂಹ ಜಯಂತಿ ಹಾಗೂ ಬ್ರಹ್ಮೋತ್ಸವ ಧಾರ್ಮಿಕ ಸಮಾರಂಭವು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡಿತು.
ಸಮೀಕ್ಷೆ ವೇಳೆ ಮಾದಿಗ ಎಂದೇ ನಮೂದಿಸಬೇಕು
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರ ಸಮೀಕ್ಷೆ ಆರಂಭಿಸಿದ್ದು ಜನರಲ್ಲಿ ತಿಳಿವಳಿಕೆ ಮೂಡಿಸುವ ಸಲುವಾಗಿ ೩ ದಿನಗಳ ಕಾಲ ತಾಲೂಕಿನಲ್ಲಿ ಜಾಗೃತಿ ರಥ ಸಂಚರಿಸಲಿದೆ ಎಂದು ಮಾದಿಗ ದಂಡೋರ ಸಮಿತಿಯ ತಾಲೂಕು ವಕ್ತಾರ ನಾಗರಾಜು ಕೆ.ಎಂ. ತಿಳಿಸಿದರು. ಮಾದಿಗ ಸಮುದಾಯದವರು ಗಣತಿದಾರರರು ಬರುವ ಮುನ್ನ ಕುಟುಂಬದ ಬಿಪಿಎಲ್ ಪಡಿತರ ಚೀಟಿ, ಆಧಾರ್‌ ಕಾರ್ಡ್ ಅಥವಾ ಜಾತಿ ಪ್ರಮಾಣ ಪತ್ರವನ್ನು ಮೊದಲೇ ಸಂಗ್ರಹಿಸಿಟ್ಟುಕೊಂಡು ಸಮೀಕ್ಷೆಯ ಯಶಸ್ಸಿಗೆ ಹಾಗೂ ಮಾದಿಗ ಜನಾಂಗದ ಶ್ರೇಯಸ್ಸಿಗೆ ಸಹಕರಿಸಬೇಕಿದೆ ಎಂದರು.
ಚಾಡಿ ಮಾತು ಕೇಳುವ ಶಿವರಾಂ ಅಣ್ಣರಿಂದ ಪಕ್ಷ ಸಂಘಟನೆ ಸಾಧ್ಯವೆ
ಪಕ್ಷವನ್ನು ಕಟ್ಟಿ ಬೆಳೆಸಬೇಕಾದ ನಾಯಕರೇ ಪಕ್ಷ ಒಡೆಯುವ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಕಂಡಕಂಡವರ ಮಾತಿಗೆಲ್ಲಾ ಕಿವಿಗೊಡುವ ಬಿ.ಶಿವರಾಂ ಅವರಿಂದ ಪಕ್ಷ ಸಂಘಟನೆ ಸಾಧ್ಯವೇ ಎಂದು ಪುರಸಭೆ ಅಧ್ಯಕ್ಷ ಎ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ನಾನು ಇತ್ತೀಚಿಗೆ ರಾಜಕೀಯಕ್ಕೆ ಬಂದವನಲ್ಲ ಸುಮಾರು ೨೫ ವರ್ಷಗಳಾಗಿದ್ದು ಉಪಾಧ್ಯಕ್ಷನಾಗಿ ಕಾಂಗ್ರೆಸ್ ನಗರ ಅಧ್ಯಕ್ಷನಾಗಿ ಕೆಲಸ ಮಾಡಿರುವ ಅನುಭವವಿದ್ದು ಇತ್ತೀಚೆಗೆ ಪಕ್ಷದಲ್ಲಿ ಬಂದ ಸೇರ್ಪಡೆಯಾದವರಿಗೆ ಮಣೆ ಹಾಕುತ್ತಿರುವ ಬಿ ಶಿವರಾಂ ಅವರು ತಮ್ಮ ಪಕ್ಷವನ್ನೇ ಒಡೆದು ಆಳುವ ನೀತಿಗೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.
ಒಬ್ಬ ನೈಜ ಕವಿ ರೂಪಕಗಳ ಹುಡುಕಾಟದಲ್ಲಿರುತ್ತಾನೆ
ವೃತ್ತಿಯಲ್ಲಿ ಕೃಷಿಕರೂ ಪ್ರವೃತ್ತಿಯಲ್ಲಿ ಲೇಖಕರೂ ಆಗಿರುವ ಮಹೇಶ್ ಭಾರದ್ವಾಜ್ ಹಂದ್ರಾಳುರವರ ಎರಡು ಕೃತಿಗಳ ಲೋಕಾರ್ಪಣೆ ಸಮಾರಂಭ ಇತ್ತೀಚೆಗೆ ಬೇಲೂರು ತಾಲೂಕು ಹಗರೆ ಸಮೀಪದ ಹಂದ್ರಾಳು ಗ್ರಾಮದ ಲಕ್ಷ್ಮೀ ನಾರಾಯಣ ದೇವಸ್ಥಾನದ ಅಂಗಳದಲ್ಲಿ ನಡೆಯಿತು. ಒಳಗೆ ತಳಮಳವಿಲ್ಲದ ಯಾವುದೇ ಸಾಹಿತಿ ಅಥವಾ ಕವಿ ಉತ್ತಮವಾದುದನ್ನು ಸೃಷ್ಟಿಸಲಾರ. ಮಹೇಶ್ ಭಾರದ್ವಾಜರ ಪ್ರತಿಯೊಂದು ಅಂಕಣ ಬರಹಗಳಲ್ಲಿ ಏಕತಾನತೆಗೆ ಬದಲಾಗಿ ವೈವಿಧ್ಯತೆ ಮತ್ತು ಜೀವನಾನುಭವಗಳ ಕಸುವು ತುಂಬಿದೆ ಎಂದು ಅಭಿಪ್ರಾಯಪಟ್ಟರು.
ಧರ್ಮ ಪರಿಪಾಲನೆಯಿಂದ ಮುನ್ನಡೆದರೆ ಬದುಕು ಆದರ್ಶಮಯ
ಧರ್ಮದ ಪರಿಪಾಲನೆಯಿಂದ ಮನ್ನಡೆದರೆ ಬದುಕು ಆದರ್ಶಗೊಳ್ಳುತ್ತದೆ. ಅಲ್ಲದೆ ಸತ್ಕಾರ್ಯಗಳಿಂದ ಮನುಷ್ಯ ಅಂತರಂಗ ಪರಿಶುದ್ಧವಾಗುತ್ತದೆ ಎಂದು ಬಾಳೆಹೂನ್ನೂರು ಶ್ರೀಮದ್ ರಂಬಾಪುರಿ ೧೦೦೮ ಜಗದ್ಗುರು ಡಾ. ವೀರ ಸೋಮೇಶ್ವರ ಜಗದ್ಗುರು ಭಗವತ್ಪಾದರು ತಿಳಿಸಿದ್ದಾರೆ. ಮುಸುವತ್ತೂರಿನ ನೂತನ ಶ್ರೀ ವೀರಭದ್ರೇಶ್ವರ ದೇವಸ್ಥಾನ ಪುನರ್ ನಿರ್ಮಾಣ ಪ್ರಾಣ ಪ್ರತಿಷ್ಠಾಪನೆ ಮತ್ತು ಶ್ರೀ ಶಂಭುಲಿಂಗೇಶ್ವೇರ ಜಂಪೋತ್ಸವದ ಅಂಗವಾಗಿ ಜರುಗಿದ ಜನ ಜಾಗೃತಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ತಿಳಿಸಿದರು.
ಎಲ್ಲಾ ಮತಧರ್ಮಗಳ ಮೂಲ ಸನಾತನವೇ ಆಗಿದೆ
ತೆಂಕಲಗೂಡು ಬೃಹನ್ಮಠದಲ್ಲಿ ಆಯೋಜಿಸಲಾಗಿದ್ದ ಪಂಚಮಹೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಭರತದೇಶ ಹಲವು ಧರ್ಮಗಳ ಉಗಮಗಳ ಪುಣ್ಯಸ್ಥಳವಾಗಿದೆ. ಇಲ್ಲಿ ಉಗಮಗೊಂಡ ಧರ್ಮಗಳು ಸೇರಿದಂತೆ ಅನ್ಯ ನಾಡಿನಿಂದ ವಲಸೆ ಬಂದು ಇಲ್ಲಿ ಪ್ರವರ್ಧಮಾನವಾಗಿರುವ ಧರ್ಮದ ಜನರ ಮೂಲ ಸಹ ಸನಾತನವೇ ಆಗಿದೆ. ವೀರಶೈವ ಧರ್ಮ ಸಹ ಸನತಾನ ಧರ್ಮದ ಒಂದು ಕವಲು. ಪಾಕಿಸ್ತಾನದಲ್ಲಿ ದಾಳಿ ಮಾಡುತ್ತಿರುವ ಜನರು ಸಹ ಸನಾತನಿಗಳೆ ಆದರೆ, ಬಾಲ್ಯದಲ್ಲಿ ನೀಡುವ ತಪ್ಪು ಸಂಸ್ಕಾರದಿಂದಾಗಿ ಹಿಂಸವಾದಿಗಳಾಗಿ ಮಾರ್ಪಟ್ಟಿದ್ದಾರೆ ಎಂದು ಡಾ.ಶ್ರೀ ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಆದರ್ಶ ಪುರುಷರ ಆದರ್ಶಗಳನ್ನು ನಾವು ಪಾಲಿಸುತ್ತಿಲ್ಲ
ಎಲ್ಲರೂ ಸಜ್ಜನರ ಸಹವಾಸ ಮಾಡಬೇಕು, ನೀತಿವಂತರಾಗಿರಬೇಕು, ಅನ್ಯಾಯಕ್ಕೆ ಕೈ ಹಾಕಬಾರದು, ಸನ್ಮಾರ್ಗದಲ್ಲಿ ನಡೆಯಬೇಕು. ಇದನ್ನೇ ಭಗವಾನ್ ಬುದ್ಧ, ಕನಕದಾಸರು, ವಿವೇಕಾನಂದರು, ಗಾಂಧೀಜಿ ಹೇಳಿದರು. ಆದರೆ ನಾವು ಅದಕ್ಕೆ ಪೂರಕವಾಗಿ ನಡೆಯುತ್ತಿಲ್ಲ, ಮಾರಕವಾಗಿ ನಡೆಯುತ್ತಿದ್ದೇವೆ ಎಂದು ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಬೇಸರ ವ್ಯಕ್ತಪಡಿಸಿದರು. ಎರಡು ಸಾವಿರ ವರ್ಷಗಳ ಹಿಂದೆ ಹೇಳಿದ ಮಾತುಗಳು ಇಂದಿಗೂ ಕೂಡ ಅನುಷ್ಠಾನಕ್ಕೆ ತರಲು ಆಗುತ್ತಿಲ್ಲ. ಈ ವಿಚಾರದಲ್ಲಿ ಎಡವುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
  • < previous
  • 1
  • ...
  • 91
  • 92
  • 93
  • 94
  • 95
  • 96
  • 97
  • 98
  • 99
  • ...
  • 508
  • next >
Top Stories
ಅನ್ನಭಾಗ್ಯ ಅಕ್ರಮಕ್ಕೆ ಬ್ರೇಕ್‌ : ಮುಖ್ಯಮಂತ್ರಿ ಸಿದ್ದರಾಮಯ್ಯ
ವಿಶ್ವದ ನಂ.1 ಶ್ರೀಮಂತ ಪಟ್ಟದಿಂದ ಮಸ್ಕ್‌ ಔಟ್‌: ಲ್ಯಾರಿ ಈಗ ನಂ.1
ಎಸ್ಸಿ ಒಳ ಮೀಸಲಿಗೆ 4 ಸಮುದಾಯ ಕಿಡಿ
ಮೋದಿ ಜತೆ ಮಾತನಾಡಲು ಉತ್ಸುಕ: ಟ್ರಂಪ್‌
ನೇಪಾಳ ಆಯ್ತು ಈಗ ಫ್ರಾನ್ಸಲ್ಲೂ ಜನರ ದಂಗೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved