ಸೇವೆ ಸಲ್ಲಿಸುವಲ್ಲಿ ಲಯನ್ಸ್ ಕ್ಲಬ್ಗೆ ಅಗ್ರಗಣ್ಯ ಸ್ಥಾನ ಈ ಭೂಮಿ ಮೇಲೆ ಬಹಳಷ್ಟು ಸಂಘಸಂಸ್ಥೆಗಳಿವೆ. ಆದರೆ ಶಿಸ್ತಿನ, ಸುಸಂಸ್ಕೃತಿಯಿಂದ ಇಡೀ ಸಮುದಾಯಕ್ಕೆ ಸೇವೆಯನ್ನು ಸಲ್ಲಿಸುವಲ್ಲಿ ಲಯನ್ಸ್ ಕ್ಲಬ್ ಅಗ್ರಗಣ್ಯ ಸ್ಥಾನದಲ್ಲಿದೆ ಎಂದು ಅರಕಲಗೂಡಿನ ವಿಶ್ವ ಬ್ರಹ್ಮ ಮಹಾಸಂಸ್ಥಾನ ಅರೆಮಾದನಹಳ್ಳಿ ಮಠದ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ತಿಳಿಸಿದರು. ಇಡೀ ಪ್ರಕೃತಿಯೇ ಪರೋಪಕಾರಕ್ಕಾಗಿ ಇದೆ, ಹರಿಯುತ್ತಿರುವ ನದಿ, ಫಲ ಕೊಡುತ್ತಿರುವ ವೃಕ್ಷ, ಹಾಲನ್ನು ಕೊಡುವ ಹಸು ಇವೆಲ್ಲಾವನ್ನು ತೋರಿಸಿ ಹೇಳುವಾಗ ಕೂಡ ಪರೋಪಕಾರಕ್ಕಾಗಿಯೇ ಇರುವುದು ಎನ್ನುವ ಮಾತನ್ನು ವಾಲ್ಮೀಕಿ ಮಹರ್ಷಿಯು ಅಂದಿನ ಕಾಲದಲ್ಲಿಯೇ ಲವಕುಶರಿಗೆ ಹೇಳಿದ ಮಾತು ಎಂದರು.