ಅಧಿಕಾರಿಗಳಿಗೆ ಹಂದಿಯ ಹಾವಳಿ, ಗಟಾರಗಳ ಗಬ್ಬು ವಾಸನೆ ದರ್ಶನಹಾನಗಲ್ಲ ಸ್ವಚ್ಛತೆಯ ದೋಷ ಪರಿಶೀಲನೆಗಾಗಿ ತಾಲೂಕು ವೈದ್ಯಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಪಟ್ಟಣದ ನವನಗರ ಬಡಾವಣೆಗೆ ತೆರಳಿದಾಗ, ಸಾರ್ವಜನಿಕರು ಹಂದಿಯ ಹಾವಳಿ, ಗಟಾರಗಳ ಗಬ್ಬು ವಾಸನೆ, ನಾಲ್ಕಾರು ತಿಂಗಳಿನಿಂದ ಗಟಾರ ಸ್ವಚ್ಛಗೊಳಿಸದಿರುವುದನ್ನು ಪ್ರಸ್ತಾಪಿಸಿ ಸ್ವಚ್ಛತೆಗೆ ಆದ್ಯತೆ ನೀಡಲು ಬೇಡಿಕೊಂಡರು.