ಕಾರ್ಮಿಕರೇ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ: ಸಚಿನ್ ಕುಮಾರ್ ಶಿವಪೂಜಿಕಾರ್ಮಿಕರಿಗೆ ಸಮಾನತೆ ಜೊತೆಗೆ ರಕ್ಷಣೆ ನೀಡಬೇಕೆಂಬ ಉದ್ದೇಶದಿಂದ ಹಲವಾರು ಕಾಯ್ದೆ ಜಾರಿಗೆ ತರಲಾಯಿತು. ಕೆಲಸಕ್ಕೆ ತಕ್ಕ ಕೂಲಿ, ಸಮಯ ನಿಗಧಿ, ವಾರಕ್ಕೆ ಒಂದು ದಿನ ರಜೆ, ವೈದ್ಯಕೀಯ ವೆಚ್ಚ, ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಸೌಲಭ್ಯ ನೀಡಲಾಗಿದೆ. ಕಾರ್ಮಿಕರು ಕಾಯ್ದೆಯ ಬಗ್ಗೆ ತಿಳಿವಳಿಕೆ ಪಡೆದು ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.