ಚುನಾವಣೆ ಬದುಕು ಕಟ್ಟುವ ಪ್ರಕ್ರಿಯೆ : ಮಂಡ್ಯ ರಮೇಶ್ಒಂದು ಮತದಾನದಿಂದ ಯಾವ ಬದಲಾವಣೆಯಾಗುತ್ತದೆ ಎಂಬ ಆಲೋಚನೆಯನ್ನು ದೂರಮಾಡಿಕೊಳ್ಳಬೇಕು. ಬೇರೆ ಊರು, ದೇಶಗಳಿಂದ ಬಂದು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಜನರಿದ್ದಾರೆ. ಅವರು ನಮಗೆ ನಿದರ್ಶನವಾಗಬೇಕು. ಮತದಾನ ಪವಿತ್ರವಾದ, ಜವಾಬ್ದಾರಿಯುತ ಹಾಗೂ ಆತ್ಮತೃಪ್ತಿ ನೀಡುವ ಕೆಲಸ. ಎಲ್ಲರೂ ತಪ್ಪದೇ ಮತದಾನ ಮಾಡಿ ಹಾಗೂ ತಮ್ಮ ಸುತ್ತ ಮುತ್ತಲು ಇರುವ ಸಾರ್ವಜನಿಕರು ಹಾಗೂ ಯುವಜನರನ್ನು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೆರೇಪಿಸಿ ಎಂದು ಮಂಡ್ಯ ರಮೇಶ್ ತಿಳಿಸಿದರು.