ಅಯೋಧ್ಯೆಯಲ್ಲಿ ಮಂಡಲೋತ್ಸವ ಪೂರೈಸಿದ ಪೇಜಾವರ ಶ್ರೀಗಳಿಗೆ 17ರಂದು ಸ್ವಾಗತ ಸಮಾರಂಭಜೋಡುಕಟ್ಟೆಯಿಂದ ತೆರೆದ ವಾಹನದಲ್ಲಿ ಶ್ರೀಗಳನ್ನು ನೂರಾರು ವಾಹನಗಳ ಜಾಥಾದೊಂದಿಗೆ ಕೆ.ಎಂ. ಮಾರ್ಗ - ಹಳೆ ಸರ್ವಿಸ್ ಬಸ್ ನಿಲ್ದಾಣ, ಸಂಸ್ಕೃತ ಕಾಲೇಜಿಗೆ ಕರೆತಂದು, ಅಲ್ಲಿಂದ ಕಾಲ್ನಡಿಗೆಯಲ್ಲಿ ರಥಬೀದಿಗೆ ಬಂದು ಶ್ರೀಕೃಷ್ಣದೇವರು, ಶ್ರೀ ಅನಂತೇಶ್ವರ ಶ್ರೀ ಚಂದ್ರಮೌಳೀಶ್ವರ ದೇವರ ದರ್ಶನ ಪಡೆದು ಪೇಜಾವರ ಮಠ ಪ್ರವೇಶಿಸುವರು.