ಅಂಬೇಡ್ಕರ್ ಅವರನ್ನು ಹೃದಯದಲ್ಲಿಟ್ಟು ಪೂಜಿಸಿಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಪೂಜೆ ಮಾಡುವುದನ್ನು, ಮೆರವಣಿಗೆ ಮಾಡುವುದನ್ನು ನಿಲ್ಲಿಸಿ. ಯಾರು ಅವರನ್ನು ಹೃದಯದಲ್ಲಿಟ್ಟು, ಅರ್ಥೈಸಿಕೊಳ್ಳುತ್ತಾರೋ ಆಗ ಅವರು ಯಶಸ್ವಿಯಾಗುತ್ತಾರೆ. ಅಂಬೇಡ್ಕರ್ ಅವರು ಒಂದು ಜಾತಿಗೆ ನ್ಯಾಯ, ರಕ್ಷಣೆ ಕೊಟ್ಟಿಲ್ಲ. ದೇಶದ ಸಮಸ್ಥ ನಾಗರೀಕರಿಗೂ ನ್ಯಾಯ ಒದಗಿಸಿಕೊಟ್ಟಿದ್ದಾರೆ ಎಂದು ಕನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಹೇಳಿದರು.