ಆರ್ಯ ವೈಶ್ಯ ಸಮಾಜದ್ದು ಮಾನವತ್ವದ ಸೇವೆರಾಮನಗರ: ಮನುಷ್ಯನ ಕಣ್ಣಲ್ಲಿ ನೀರು ಬರಿಸುವಂತೆ ಮಾಡುವುದು ಮೃಗತ್ವ, ಮನುಷ್ಯನ ಕಣ್ಣಲ್ಲಿ ನೀರೇ ಬರಿಸದಿರುವುದು ದೈವತ್ವ, ಮತ್ತೊಬ್ಬರಲ್ಲಿ ಬಂದ ಕಣ್ಣೀರನ್ನು ಒರೆಸುವುದು ಮಾನವತ್ವ. ಆರ್ಯ ವೈಶ್ಯ ಸಮಾಜ ಮಾನತ್ವ ಗುಣಗಳನ್ನು ರೂಢಿಸಿಕೊಂಡು ಸಮಾಜ ಸೇವೆ ಮಾಡುತ್ತಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದರು.