ಏಡ್ಸ್ ಬಗ್ಗೆ ಭಯಕ್ಕಿಂತ ಮುಂಗಾಗ್ರತೆ ಇರಬೇಕುಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಶಿವಕುಮಾರ್ ಜಿ.ಎಸ್ ಮಾತನಾಡಿ,ಏಡ್ಸ್ನಂತಹ ಮಾರಕ ರೋಗವನ್ನು ನಿರ್ಮೂಲನೆ ಮಾಡಲು ರೋಗದ ಕುರಿತು ಅರಿವು,ವಿಚಾರ ಮಂಥನಗಳನ್ನು ನಿಯಮಿತವಾಗಿ ಏರ್ಪಡಿಸಬೇಕು.ಜನತೆಗೆ ಎಚ್ಚರಿಕೆ,ಮುಂಜಾಗ್ರತೆ,ಚಿಕಿತ್ಸೆ ಬಗ್ಗೆ ಸೂಕ್ತ ಮಾಹಿತಿ ನೀಡಬೇಕಾಗಿದೆ.ಇಂದಿನ ಯುವ ಜನತೆಯಲ್ಲಿ ರೋಗ ಹೆಚ್ಚು ಕಂಡುಬರುತ್ತಿರುವುದು ವಿಷಾನೀಯ.ಶೇ 1.5 ಮಿಲಿಯನ್ ಜನತೆಯಲ್ಲಿ 14 ವರ್ಷದೊಳಗಿನ ಮಕ್ಕಳು ರೋಗಕ್ಕೆ ತುತ್ತಾಗುತ್ತಿರುವು ತೀವ್ರ ಆತಂಕದ ಸಂಗತಿಯಾಗಿದೆ.ಆದ್ದರಿಂದ ಸಮುದಾಯದಲ್ಲಿ ಹೆಚ್ಚು ಜಾಗೃತಿ ಮೂಡಿಸಿ ಭಯಮುಕ್ತರನ್ನಾಗಿಸುವುದು ತುರ್ತು ಅಗತ್ಯವಾಗಿದೆ.ಆಧುನಿಕತೆಯ ನೆಪದಲ್ಲಿ ನಡೆಯುವ ರೇವಾ ಪಾರ್ಟಿ ಆಚರಣೆಗಳಿಂದ ಏಡ್ಸ್ ಕಾಯಿಲೆ ಹೆಚ್ಚಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು