ಬಿಜೆಪಿ ಮತ ಕಸಿದುಕೊಳ್ಳುವ ಕ್ರಮ ಕಾನೂನುಬಾಹಿರ: ಗಣಪತಿಡಾ. ಬಿ.ಆರ್. ಅಂಬೇಡ್ಕರ್ ಕೊಟ್ಟತಂಹ ಸಂವಿಧಾನದಲ್ಲಿ ಪ್ರತಿಯೊಬ್ಬರು ಒಂದು ಮತದಾನವನ್ನು ನೀಡುವ ಮೂಲಕ ಪ್ರತಿಯೊಬ್ಬರ ಮತದಾನವು ಒಂದೇ ಆಗಿರುವುದು ಪ್ರಜಾಪ್ರಭುತ್ವದ ವೈಭವವಾಗಿದೆ. ಇದನ್ನು ಸಹಿಸದ ಬಿಜೆಪಿ ಧರ್ಮ-ಜಾತಿಯನ್ನು ಎಳೆದು ತರುವ ಮೂಲಕ ಜನರಲ್ಲಿ ಕಂದಕ ಸೃಷ್ಟಿಸುತ್ತಿದೆ ಎಂದು ತಾ.ಪಂ. ಮಾಜಿ ಅಧ್ಯಕ್ಷ, ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಗಣಪತಿ ಆರೋಪಿಸಿದರು.