ಪಕ್ಷ ನೀಡುವ ವ್ಹಿಪ್ಗೆ ಹೆದರುವ ವ್ಯಕ್ತಿ ನಾನಲ್ಲಾತೀರ್ಥಹಳ್ಳಿ ಪಪಂ ಅಧ್ಯಕ್ಷನಾಗಿ ಧರ್ಮ, ಜಾತಿ ರಾಜಕೀಯ ಮೀರಿ ಕಾಂಗ್ರೆಸ್ ಪಕ್ಷಕ್ಕೆ ಹೆಸರು ತರುವಂತೆ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ನನ್ನ ವಿರುದ್ಧ ಸ್ವಪಕ್ಷೀಯ ಸದಸ್ಯರೇ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದು, ಇದಕ್ಕಾಗಿ ಷಡ್ಯಂತ್ರ ರೂಪಿಸಿರುವ ಪಕ್ಷದ ಮುಖಂಡರು ಪಶ್ಚಾತ್ತಾಪ ಪಡುವ ದಿನ ದೂರವಿಲ್ಲ ಎಂದು ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಪಕ್ಷದ ಮುಖಂಡತ್ವದ ವಿರುದ್ಧ ಹರಿಹಾಯ್ದರು.