ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ಐವರ ಸಾವು!ಸಹಸ್ರಲಿಂಗ ಪ್ರವಾಸಿ ತಾಣವಾಗಿದ್ದು, ರಜೆಯ ದಿನದಂದು ಇಲ್ಲಿಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಇಲ್ಲಿಯೇ ಊಟ ತಯಾರಿಸಿ ಸಂಜೆ ವರೆಗೂ ಇದ್ದು ಹೋಗುತ್ತಾರೆ. ಘಟನೆ ನಡೆದ ಸಹಸ್ರಲಿಂಗದ ಭೂತನ ಗುಂಡಿ ಆಳವಾಗಿದ್ದು, ಇಲ್ಲಿಯ ಕಲ್ಲು-ಬಂಡೆ ಸಹ ಜಾರುವುದರಿಂದ ನೀರಿಗಿಳಿಯದಂತೆ ಸೂಚನಾ ಫಲಕವನ್ನೂ ಅಳವಡಿಸಲಾಗಿದೆ.