ಕಾಮಗಾರಿ ಪೂರ್ಣಗೊಳಿಸದ ಅಧಿಕಾರಿಗೆ ಅಧ್ಯಕ್ಷರ ತರಾಟೆಕನ್ನಡಪ್ರಭ ವಾರ್ತೆ ಸಿಂದಗಿ: ಒಳಚರಂಡಿ ಕಾಮಗಾರಿಗೆ ನೀಡಲಾಗಿದ್ದ ಅವಧಿ ಮುಗಿದರೂ ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ನೋಟಿಸ್ ನೀಡಿ ಎಂದು ಹೇಳಿದರೂ ಯಾವುದೇ ಕ್ರಮಕೈಗೊಂಡಿಲ್ಲ. ನಿಮಗೆ ಏನಾದರೂ ತೊಂದರೆಗಳಿದ್ದರೆ ಹೇಳಿ, ಅದನ್ನು ಬಿಟ್ಟು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಕಾಮಗಾರಿ ಮಾಡಿದರೆ ನಡೆಯುವುದಿಲ್ಲ ಎಂದು ಒಳಚರಂಡಿ ವಿಭಾಗದ ಎಂ.ಎಲ್.ಹೊನಕಟ್ಟಿಯನ್ನು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ತರಾಟೆಗೆ ತೆಗೆದುಕೊಂಡರು.