ಪರಸ್ಪರ ಭ್ರಾತೃತ್ವ ಮೂಡಿಸುವ ವಿಜಯದಶಮಿಕನ್ನಡಪ್ರಭ ವಾರ್ತೆ ಇಂಡಿ: ನಗರದಲ್ಲಿ ವಿಜಯದಶಮಿ ನಿಮಿತ್ತ ಭಾನುವಾರ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಜನರೊಂದಿಗೆ ಬೆರೆತು ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬ ಆಚರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಹೋದರತ್ವದ ಸಂಕೇತವೇ ಬನ್ನಿ ವಿನಿಮಯ. ನಮ್ಮ ಬದುಕಿನಲ್ಲಿ ಸುಖ, ಶಾಂತಿ ನಲೆಸಲಿ, ರೈತರಿಗೆ ಸಮದ್ಧ ಬೆಳೆ, ಮಳೆ ನೀಡಲಿ ಎಂದು ಆದಿಶಕ್ತಿಯಲ್ಲಿ ಪ್ರಾರ್ಥಿಸಿದರು. ನಮ್ಮ ಮನಸ್ಸಿನಲ್ಲಿನ ಕೆಟ್ಟ ಯೋಚನೆ, ನಮ್ಮ ದುಶ್ಚಟಕ್ಕೆ ತಿಲಾಂಜಲಿ ಹೇಳುವುದಕ್ಕೆ ವಿಜಯದಶಮಿ ಕಾರಣವಾಗಬೇಕು.