ಸಂತೆಗೆ ಖ್ಯಾತಿ, ಸೌಲಭ್ಯ ನೋಡಿದರೆ ಕುಖ್ಯಾತಿಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದ ಬಳಿಯ ಜಾನುವಾರುಗಳ ಸಂತೆ ಎಂದರೆ ಎಲ್ಲೆಡೆ ಹೆಸರು ವಾಸಿ. ಆದರೆ, ಇಲ್ಲಿ ಯಾವುದೇ ಮೂಲ ಸೌಲಭ್ಯಗಳನ್ನು ಕಾಣದೇ ಸಮಸ್ಯೆಗಳ ಸುಳಿಯಲ್ಲಿಯೇ ದಿನ ದೂಡುತ್ತಿದೆ. ಇದರಿಂದ ಜಾನುವಾರು ಹಾಗೂ ಸಂತೆಗೆ ಬರುವ ರೈತರು ರೋಸಿ ಹೋಗಿದ್ದು, ಹಿಡಿಶಾಪ ಹಾಕುತ್ತಿದ್ದಾರೆ. ಹೌದು, ಜಾನುವಾರುಗಳ ಸಂತೆಗೆ ವಿವಿಧ ಮೂಲಸೌಕರ್ಯಗಳಿಲ್ಲದೇ ಬಳಲುತ್ತಿದೆ. ಪ್ರತಿ ಸೋಮವಾರ ನಡೆಯುವ ಜಾನುವಾರುಗಳ ಸಂತೆಗೆ ಜಾನುವಾರುಗಳ ಖರೀದಿ ಹಾಗೂ ಮಾರಾಟಕ್ಕಾಗಿ ಸುತ್ತಮುತ್ತಲಿನ ತಾಲೂಕುಗಳು ಮತ್ತು ಗ್ರಾಮಗಳಿಂದ ಅಪಾರ ಸಂಖ್ಯೆ ರೈತರು ಆಗಮಿಸುತ್ತಾರೆ. ಆದರೆ, ಸಂತೆಗೆ ಬಂದವರು ಇಲ್ಲಿಯ ವ್ಯವಸ್ಥೆ ಕಂಡು ಹೈರಾಣಾಗುತ್ತಿದ್ದಾರ