ಹಿಂದೂ ಮಹಾಗಣಪತಿಗಳಿಗೆ ಅದ್ಧೂರಿ ವಿದಾಯ
Sep 17 2025, 01:06 AM ISTನವನಗರದ ಪಂಚಾಕ್ಷರಿನಗರ ಹಾಗೂ ಪುನೀತ ರಾಜಕುಮಾರ ಸರ್ಕಲ್ನಲ್ಲಿ ಎರಡು ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಲಾಗಿತ್ತು. ಇನ್ನು ಅಶೋಕನಗರದಲ್ಲಿ ಒಂದು ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಸತತ 21 ದಿನಗಳಿಂದ ಶ್ರದ್ಧಾ, ಭಕ್ತಿಯಿಂದ ಪೂಜಿಸಲಾಯಿತು. ಪ್ರತಿನಿತ್ಯ ಅನ್ನ ಸಂತರ್ಪಣೆ, ವಿಶೇಷ ಅಲಂಕಾರ ಪೂಜೆ, ಹೋಮ ಹವನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು.