ವಿಷಮುಕ್ತ ಆಹಾರಕ್ಕೆ ಸಾವಯವ ಕೃಷಿ ಅಳವಡಿಕೆ ಅಗತ್ಯ: ಸಾವಯವ ಕೃಷಿಕ ಪ್ರವೀಣ್ ಬಾದಾಮಿ ಸಲಹೆ
Apr 28 2025, 12:50 AM ISTಈಗಿನ ರೈತರು ಸಾವಯವ ಕೃಷಿಯಿಂದ ಇಳುವರಿ ಕಡಿಮೆ, ಲಾಭ ಕಡಿಮೆ ಎನ್ನುತ್ತಾರೆ. ಸ್ವಲ್ಪ ತಾಳ್ಮೆ ವಹಿಸಿದರೆ 3 ವರ್ಷಗಳ ನಂತರ ಒಳ್ಳೆಯ ಇಳುವರಿ, ಲಾಭ ಪಡೆಯಬಹುದು. ರಾಸಾಯನಿಕ ಸಿಂಪಡಣೆ ಮಾಡಿದ ತರಕಾರಿಗಳಿಗೂ, ಸಾವಯವ ಕೃಷಿ ಪದ್ಧತಿಯಿಂದ ಬೆಳೆದ ತರಕಾರಿಗಳಿಗೂ ತುಂಬಾ ವ್ಯತ್ಯಾಸವಿದೆ. ಸಾವಯವದಿಂದ ಬೆಳೆದ ತರಕಾರಿಗಳು ತುಂಬಾ ರುಚಿಕರವಾಗಿರುತ್ತವೆ .